Guruvar Laxmi Vrat Katha Kannada (ಮಾರ್ಗಶಿರ ಲಕ್ಷ್ಮಿ ವ್ರತ ಪೂಜಾ ಮತ್ತು ಕಥೆ ಸಹಿತ) - Summary
ಶ್ರೀ ವಿಷ್ಣು ಹಾಗೂ ಲಕ್ಷ್ಮಿಯ ಆರಾಧನೆಗೆ ಮೀಸಲಿಟ್ಟಿರುವ ಮಾಸವೇ, ಮಾರ್ಗಶಿರ/ ಮಾರ್ಗಶೀರ್ಷ ಮಾಸ. ಈ ಮಾರ್ಗಶಿರ ಮಾಸದ ಪ್ರತೀ ಗುರುವಾರದಂದು ಲಕ್ಷ್ಮಿ ಪೂಜೆ ಅಥವಾ ಗುರುವಾಗ ವೃತವನ್ನು ಮಾಡಲಾಗುವುದು. ಈ ದಿನ ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಐಶ್ವರ್ಯ, ಸಂಪತ್ತು, ಅದೃಷ್ಟ ನೀಡಿ ಹರಿಸುತ್ತಾಳೆ ಎಂಬ ನಂಬಿಕೆಯಿದೆ.
ಬ್ರಹ್ಮನ ಮಾನಸ ಮಗನಾದ ಮಹರ್ಷಿ ಅಂಗೀರನಿಗೆ ಬೃಹಸ್ಪತಿ, ಉತ್ತರ ಮತ್ತು ಸಂವರ್ತ ಎನ್ನುವ ಮೂವರು ಮಕ್ಕಳಿದ್ದರು. ಇವರಲ್ಲಿ ಗುರು ಅಂದರೆ ಬೃಹಸ್ಪತಿಯು ಜ್ಯೇಷ್ಠನಾಗಿದ್ದನು. ಗುರುವಾರದಂದು ಆತನನ್ನು ಪೂಜಿಸುವುದರಿಂದ ಧನ, ವಿದ್ಯೆ, ಗೌರವ, ಪ್ರತಿಷ್ಠೆ ಹೀಗೆ ಹಲವಾರು ನಿರೀಕ್ಷಿತ ಫಲ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಗುರುವಾರದಂದು ಉಪವಾಸವಿದ್ದು ವ್ರತ ಕಥೆಯನ್ನು ಕೇಳುವುದರಿಂದ ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಗುರುವಾರ ವ್ರತ ಕಥೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಮಾರ್ಗಶಿರ ಗುರುವಾರ ವೃತದ ಪೂಜಾ ವಿಧಿ:
- ಪೂಜೆಯನ್ನು ಮಾಡುವ ಮೊದಲು, ಆ ಸ್ಥಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ.
- ರಂಗೋಲಿಯ ಮಧ್ಯದಲ್ಲಿ ಸ್ವಸ್ತಿಕವನ್ನು ಬಿಡಿಸಿ.
- ಮಾವಿನೆಲೆ, ತೆಂಗಿನಕಾಯಿಯ ಕಳಸವನ್ನು ಸ್ಥಾಪಿಸಿ.
- ಲಕ್ಷ್ಮಿಯ ಪ್ರತಿಮೆಯನ್ನು ಮುಂಭಾಗದಲ್ಲಿ ಇರಿಸಿ.
- ಲಕ್ಷ್ಮಿ ಸ್ತೋತ್ರವನ್ನು ಪಠಿಸುವ ಮೂಲಕ ದೇವಿಯನ್ನು ಪೂಜಿಸಿ
- ಹಾಲು, ತೆಂಗಿನಕಾಯಿ ಮತ್ತು ಸಿಹಿತಿಂಡಿಗಳು ಇತ್ಯಾದಿಗಳನ್ನು ಅರ್ಪಿಸಿ.
- ಪೂಜೆ ವ್ರತ ಕಥೆಯನ್ನು ಓದಿ.
- ಸಂಜೆ ಆ ಕಳಸ ಮತ್ತು ಲಕ್ಷ್ಮಿಗೆ ಮತ್ತೆ ಪೂಜೆಯನ್ನು ಮಾಡಿ, ಉಪವಾಸವನ್ನು ಮುರಿಯಿರಿ.
- ಕೊನೆಯ ಗುರುವಾರದಂದು, 5 ಕನ್ಯೆಯರಿಗೆ ತಾಂಬೂಲವನ್ನು ನೀಡಬೇಕು.
ಮಾರ್ಗಶಿರ ಗುರುವಾರ ವ್ರತದ ನಿಯಮಗಳು:
- ನಿಮಗೆ ಗುರುವಾರ ಉಪವಾಸ ಮಾಡಲು ಸಾಧ್ಯವಾಗದಿದ್ದರೆ, ಸತ್ಯನಾರಾಯಣ ಕಥೆ ಅಥವಾ ಗುರುವಾರ ವ್ರತ ಕಥೆ ಓದಿ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ.
- ಮಾರ್ಗಶಿರ ಮಾಸದ ಗುರುವಾರದಂದು ಲಕ್ಷ್ಮಿ ಮತ್ತು ನಾರಾಯಣನ ವಿಗ್ರಹಗಳನ್ನು ಒಟ್ಟಿಗೆ ಇರಿಸಿ. ಶ್ರೀ ಹರಿ ಬೆಲ್ಲ ಮತ್ತು ಬೇಳೆ, ಮತ್ತು ಲಕ್ಷ್ಮಿ ಗೆ ಖೀರ್ ಅಥವಾ ಹಾಲಿನೊಂದಿಗೆ ತಯಾರಿಸಿದ ಯಾವುದನ್ನಾದರೂ ಅರ್ಪಿಸಿ.
- ಈ ದಿನ ದೇವಸ್ಥಾನಕ್ಕೆ ಗೋಧಿ ಮತ್ತು ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಂಬಲಾಗಿದೆ.
- ಗುರುವಾರದಂದು ಹಸುವಿಗೆ ಬೆಲ್ಲ, ಬೇಳೆ ಮತ್ತು ಅರಿಶಿನವನ್ನು ರೊಟ್ಟಿಯಲ್ಲಿ ನೀಡುವುದರಿಂದ ಶ್ರೀ ಹರಿಯು ಹೆಚ್ಚುವರಿ ಅನುಗ್ರಹವನ್ನು ನೀಡುತ್ತಾನೆ. ಪೂಜೆಯ ರೂಪವಾಗಿ ಗೋವಿಗೆ ತಿಲಕವನ್ನು ಹಚ್ಚಿ.
- ನೀವು ಯಾವುದೇ ಮಂಗಳಕರ ಕೆಲಸವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರೆ, ಮಾರ್ಗಶಿರ ಮಾಸದ ಗುರುವಾರ ಮಾಡಲು ಉತ್ತಮ ದಿನವಾಗಿದೆ. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ಪುನರಾವರ್ತನೆಯಾಗುತ್ತವೆ ಎಂದು ಹೇಳಲಾಗುತ್ತದೆ.
- ಈ ದಿನದಂದು, ದೇವಾಲಯ ಮತ್ತು ತುಳಸಿಗೆ ದೀಪಗಳನ್ನು ಕಾಣಿಕೆಯಾಗಿ ನೀಡಿ. ಇದು ಕುಟುಂಬದ ಸಮಸ್ಯೆಗಳನ್ನು ಪರಿಹರಿಸುತ್ತದೆ.